ಬಾಬರ

ಘೋರಿಯ ಮಹಮದನಿದ್ದ
ಘಜನಿಯ ಮಹಮದನಿದ್ದ
ಬಾಬರನೂ ಇದ್ದ
ಬಾಬರ ಮಾತ್ರ ಬೇರೆಯಾಗಿದ್ದ
ಅವನು ಕವಿಯಾಗಿದ್ದ

ಕಾಬೂಲಿನ ಎತ್ತರದಲ್ಲಿ ನಿಂತು
ಅವನು ದಕ್ಷಿಣದತ್ತ ನೋಡಿದನು
ಪರ್ವತಗಳ ಆಚೆ ನದಿಗಳ ಕೆಳಗೆ
ಹರಡಿತ್ತು ಉಪಖಂಡ
ಕೊನೆಯಿಲ್ಲದಂತೆ-ಆ ಘಳಿಗೆ
ಕವಿ-ಯೋಧ-ಅಶ್ವಾರೋಹಿ
ಅವನ ಚಿತ್ತದಲಿ ಮೂಡಿದುದೇನು
ಆ ಹುಚ್ಚಿಗೆ ಅರ್ಥವೇನು-
ಯಾರಿಗೂ ತಿಳಿದಿರಲಿಲ್ಲ!

ಬಾಬರ! ನಾನೂ ಬರೆಯುವೆನು ಕವಿತೆಗಳ
ಖೈಬರಿನ ಕಣಿವೆ ಕಾಬೂಲಿನ ಹೆಣ್ಣುಗಳ
ಕಲ್ಪನೆಯ ಕೆರಳಿಸುವ ನೆಲ ಮುಗಿಲುಗಳ
ಬಯಸುವೆನು ಕೈಗೆಟುಕದ ಖರ್ಜೂರ ಹಣ್ಣುಗಳ

ಅಶ್ವಾರೋಹಿಗಳಿಲ್ಲ ಅಶ್ವಗಳಿಲ್ಲ
ಹಿಂಬಾಲಿಸುವ ಪದಾತಿಯಿಲ್ಲ-ನನ್ನ ಬಳಿ
ಅದಮ್ಯ ಬಯಕೆಯೊಂದಲ್ಲದೆ ಇನ್ನೇನೂ ಇಲ್ಲ
ಬಾಬರ! ಏನು ಹೇಳಲಿ

ಹುಡುಕುತ್ತ ಕಣ್ಣಿಗೆ ಕಾಣಿಸದ ಸ್ವರ್ಗ
ಮನಸ್ಸು ಹತ್ತುವುದು ಖೈಬರಿನ ಮಾರ್ಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಕೊಲೆ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys